  ಕಾಲದ ಕರೆ

ನೂರು ಮಾತನಾಡಿ ಕರೆಯು-

	ತಿಹುದು ಜೀವಸೃಷ್ಟಿಯು

ನೂರು ಭಾವವಾಗಿ ತೆರೆಯು-

	ತಿಹುದು ಆತ್ಮದೃಷ್ಟಿಯು

ಭಾವ ಭಾವ ಬೆಡುತಿಹುದು

	ಹಾಡಿನಂತ ಮಾತನೆ

ಇಲ್ಲದಿರಲು ಮರನದಂಥ 

	ಮೂಕಮೌನ ಯಾತನೆ

ಅಂತೆ ಹರಿಯಿತಿಲ್ಲಿ ಹಾಡು

	ಇಲ್ಲ ಬೆರೆ ಭಾಷೆಯು

ಸೃಶ್ಟ್ಯೆದೆಯ ಪಡಿನುಡಿಯಲು

	ಜೀವಕೆನೋ ಆಶೆಯು

     ಆಹ್ವಾನ
ಕವಿ: ಗಂಗಾಧರ ಚಿತ್ತಾಲ

ಚೈತ್ರಯಾತ್ರೆಗೆಂದೋ ಏನೋ ಬಂದೆ ಜನ್ಮ ತಳಿ

ಬೆನ್ಗೆ ಭಾನು-ಉದಯವಿತ್ತು ಅಭಯವೆಂದು ಸಾರಿ

ವಿಶ್ವ ಕರೆಯುತಿತ್ತು ವಿಜಯರಂಗದಂತೆ ತೋರಿ:

ಕಾಲಗರ್ಭದಲ್ಲಿ ಬಾಲತೇಜ ಬೆಲೆವುದೊಂದು

ಅದುವೆ ನಿನ್ನ ಧ್ಯೇಯದೋಜವದುವೆ ಭಾಗ್ಯಬಿಂಧು

ಜೀವಪಥವ ತೆರೆಯೋ ಆ ದಿವ್ಯದಿಶೆಯಲಿಂದು.

ದಿನವು ಬಾನ ಬಸಿರಿನಿಂದ ಬೆಳಕು ಬೆಲೆವ ವೈಭವಾ

ಸಂಧ್ಯೆ ಇಂದ್ರಮಾಯೆಯಿಂದ ಬರೆವ ಸ್ವರ್ಣರಾಗ ಹಾ!

ನಿಶೆಯು ನೀಲವಾಗಿ ತೆರೆವ ತಾರಾಂಕಿತ ಶಾಂತಿಯು

ಉಷೆಯು ಮೋಹಮುಗ್ಧೆಯಂತೆ ತಳೆವ ಅರುಣಕಾಂತಿಯು

ಭಾಷೆ-ಭಾವವೇನಿದಾವ ಚೈತನ್ಯ ಲೀಲೆಯೋ

ಕಂಡ ಕಡೆಗು ಚೆಲುವ ಒಲವ ನಲವ ಮಾಲೆಮಾಲೆಯೋ

ಜೀವಮಾಯೆ ಮೋಹಕಾಯೆ ಚಿರನೂತನ ಚೆತನೆ

ದಿನವು ಈ ಧರಿತ್ರಿಮಾತೆ ಒರೆಯುಲಳಾ ಮಾತನೆ.

ಬಾನ ನೀಲಧ್ಯಾನವದನೆ ಕಂಡು ನಿತ್ಯನಲಿವುದೋ

ತನ್ನ ಹರ್ಷದಮೃತಸ್ಪರ್ಷವದಕೆ ಗಾಳಿ ತರುವದೋ.

ಪಾರವಾರ ತೆರೆವುದೋ ಪ್ರಫುಲ್ಲ ಜಲೋಲ್ಹಾಸವಾ 

ಕಾಲ ಮಾಸ ಮಾಸ ಕುಣಿವ ಋತುವಿಲಾಸರಾಸವಾ

	"ಎಂಥ ಭವ್ಯರಂಗವಿದೋ

	  ದಿನವು ದಿವ್ಯಸಂಗವಿದೋ--

	   ಬೆಳೆ ಅಥಾಂಗಬಲವನು

ನಡೆಯೊ ಮುಂದೆ, ಪಡೆಯೆ ಬಂದೆ ಸಿದ್ಢಿಯಮರಫಲವನು"

--ಎಂದು ಜೀವದಾಳದಿಂದ ಮಾರ್ಮೊಳಗಿ ಬಂದುದೋ

ಆವುದೇನೋ ಶಕ್ತಿ ದೇವಶಕ್ತಿಯಂತೆ ನಿಂದುದೋ

ಆಶೆಯೋಘ ಸೆಳೆಯುತಿತ್ತು ಮುಗಿಲಗಂಗೆಯುದರಕೆ

ಎದೆಯ ಬಯಕೆ ಬೆಳೆಯುತಿತ್ತು ಬಿದಿಗೆ ಬಿಂಬದಧರಕೆ.

ಪ್ರಾಣ ಚೇತರಿಸಿ ನಿಂತು ಮೇರುಧೀರನಂದದಿ

"ಎಂದು ಬಹುದೊ?" ಎಂದು ಕಾಯುತಿದ್ದ ದಿಗ್ಧಿಗಂತದಿ!

ಮಿಲನ

ಕವಿ: ಗಂಗಾಧರ ಚಿತ್ತಾಲ

ಜೀವವೇ ಕಣ್ಣಾಗಿ ಕಾದು ನಿಂತಿಹೆ, ಮನದೊ--

	ಳೊರತೆಯೂರಿದೆ ನೂರು ಯುಗದ ಆಸೆ

ಒಲವ ತೆಕ್ಕೆಗೆ ಮೈಯು ಹಸಿದು ಹಾತೊರೆಯುತಿದೆ

	ಎಲೆ ನಲ್ಲೆ, ಇದು ಪುರಾತನ ಪಿಪಾಸೆ

ಅಣುರೇಣುವೂ ಕೂಗಿ ಕರೆಯುತಿದೆ ನಿನಗಾಗಿ

	ಮಿಂಚಾಡೆ ಸಿಹಿನೋವಿನಂಥ ಸೆಳೆತ.

ಸೂರ್ಯ-ಚಂದ್ರರ ಬಂಧಿಸಿಹ ಮೋಹನವು ಇದುವೆ;

	ನಮ್ಮನೂ ಸಂಧಿಸಲು ಇದರ ಎಳೆತ!

ನೀ ಬಂದೆ; ಬೇರೊಂದು ಲೋಕವನೆ ಕರೆತಂದೆ!

	ಕಣ್ಣೊಳೊಡಮೂಡಿಹುದು ಎಂಥ ಭಾಷೆ?

ಈ ಅಂತರವು ವಿರಹ. ಓಡು ಎದೆಗೊತ್ತುವೆನು--

	ಜೀವಸಮ್ಮಿಲನವೇ ಜೀವದಾಸೆ!